Fact Check: ದೆಹಲಿಯಲ್ಲಿ ಬಿಜೆಪಿ ಗೆಲುವಿನ ನಂತರ ಯಮುನಾ ಆರತಿ? ಇಲ್ಲ, ಇದು ಹಳೇಯ ವೀಡಿಯೊ

ಈ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಜನರು ನದಿಯ ದಡದಲ್ಲಿ ಆರತಿ ಮಾಡುತ್ತಿರುವ ವೀಡಿಯೊ ಒಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ದೆಹಲಿಯಲ್ಲಿ ಬಿಜೆಪಿ ಗೆದ್ದ ಬಳಿಕ ಯಮುನಾ ನದಿಯ ದಡದಲ್ಲಿ ಆರತಿ ಮಾಡಲಾಗುತ್ತಿದೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

By Vinay Bhat  Published on  18 Feb 2025 3:53 PM IST
Fact Check: ದೆಹಲಿಯಲ್ಲಿ ಬಿಜೆಪಿ ಗೆಲುವಿನ ನಂತರ ಯಮುನಾ ಆರತಿ? ಇಲ್ಲ, ಇದು ಹಳೇಯ ವೀಡಿಯೊ
Claim: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಯಮುನಾ ನದಿಯಲ್ಲಿ ಆರತಿ ಆರಂಭ.
Fact: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 2024 ರಲ್ಲೇ ಯಮುನಾ ಆರತಿ ಪ್ರದರ್ಶಿಸಲು ಪ್ರಾರಂಭಿಸಲಾಗಿದೆ.

ಬಿಜೆಪಿ ಚುನಾವಣೆಯಲ್ಲಿ ಗೆದ್ದ ತಕ್ಷಣ ದೆಹಲಿಯಲ್ಲಿ ಯಮುನಾ ಆರತಿ ಆರಂಭವಾಗಿದೆಯೇ?. ಆರತಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವಾಗ ಅನೇಕ ಜನರು ಇದೇ ಹೇಳಿಕೆಯನ್ನು ನೀಡುತ್ತಿದ್ದಾರೆ. ದೆಹಲಿ ಚುನಾವಣೆಯಲ್ಲಿ ಯಮುನಾ ನದಿಯ ಶುಚಿಗೊಳಿಸುವಿಕೆಯು ದೊಡ್ಡ ವಿಷಯವಾಗಿತ್ತು, ಇದರ ಬಗ್ಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಹಲವು ಬಾರಿ ಗುರಿಯಾಗಿಸಲಾಗಿತ್ತು. ಇದೀಗ ಈ ವೈರಲ್ ವೀಡಿಯೊವನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, "ದೆಹಲಿ ಮತ್ತೊಮ್ಮೆ ಇಂದ್ರಪ್ರಸ್ಥದತ್ತ ಸಾಗುತ್ತಿದೆ. ಕೇಜ್ರಿವಾಲ್ ನನ್ನು ದೂರವಿಟ್ಟು ಇನ್ನು ಒಂದು ವಾರವೂ ಕಳೆದಿಲ್ಲ, ಇಂದು ದೆಹಲಿಯ ಘಾಟ್‌ಗಳಲ್ಲಿ ಯಮುನಾ ಆರತಿ ಪ್ರಾರಂಭವಾಗಿದೆ" ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಹೇಳಿಕೆ ಸುಳ್ಳು ಎಂದು ಸೌತ್‌ಚೆಕ್ ಕಂಡುಕೊಂಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 2024 ರಲ್ಲೇ ಯಮುನಾ ಆರತಿ ಪ್ರದರ್ಶಿಸಲು ಪ್ರಾರಂಭಿಸಲಾಗಿದೆ.

ಕೆಲ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಈ ವೀಡಿಯೊ ದೆಹಲಿಯ ಕಾಶ್ಮೀರ್ ಗೇಟ್ ಪ್ರದೇಶದ ಬಳಿ ಇರುವ ಯಮುನಾ ಬ್ಯಾಂಕ್‌ನದು ಎಂದು ಹೇಳಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಸುಳಿವು ಪಡೆದು, ನಾವು ಸೂಕ್ತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ನ್ಯೂಸ್ 18 ಹಿಮಾಚಲ ಫೆಬ್ರವರಿ 13, 2025 ರಂದು ವೈರಲ್ ಆಗಿರುವ ವೀಡಿಯೊ ದೆಹಲಿಯ ಕಾಶ್ಮೀರಿ ಗೇಟ್ ಯಮುನಾ ಘಾಟ್‌ನಲ್ಲಿ ನಡೆದ ಯಮುನಾ ಆರತಿಯದ್ದಾಗಿದೆ ಎಂದು ಬರೆದುಕೊಂಡಿದೆ.

ಹಾಗೆಯೆ ಟೈಮ್ಸ್ ಆಫ್ ಇಂಡಿಯಾ ಜನವರಿ 24, 2024 ರಂದು ಪ್ರಕಟಿಸಿದ ವರದಿಯ ಪ್ರಕಾರ, ದೆಹಲಿಯು ಕಾಶ್ಮೀರಿ ಗೇಟ್, ISBT ಎದುರು ನದಿಯ ಪಶ್ಚಿಮ ದಂಡೆಯಲ್ಲಿ ತನ್ನದೇ ಆದ ಘಾಟ್‌ಗಳನ್ನು ಹೊಂದಲಿದೆ ಎಂದು ವರದಿ ಸೂಚಿಸಿದೆ. ಅಲ್ಲಿ ಆರತಿ ಆಯೋಜಿಸಲಾಗುವುದು ಎಂದಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಲಲ್ಲಾ ದೇವಾಲಯದ ಪ್ರತಿಕೃತಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಪ್ರಾರ್ಥನೆ ಸಲ್ಲಿಸಿದ ವಾಸುದೇವ್ ಘಾಟ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಯಿತು.

ನಾವು Curly Tales ಎಂಬ ಯೂಟ್ಯೂಬ್ ಚಾನೆಲ್​ನಲ್ಲಿ ಕೂಡ ಈ ವೀಡಿಯೊವನ್ನು ಕಂಡುಕೊಂಡಿದ್ದೇವೆ ಡಿಸೆಂಬರ್ 10, 2024 ರಂದು ಹಂಚಿಕೊಂಡು ಈ ವೀಡಿಯೊದಲ್ಲಿ ಕಾಶ್ಮೀರಿ ಗೇಟ್‌ನ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿಯನ್ನು ತೋರಿಸಲಾಗಿದೆ. ಶೀರ್ಷಿಕೆಯು ಪ್ರತಿ ಭಾನುವಾರ ಮತ್ತು ಮಂಗಳವಾರ ಬೇಸಿಗೆಯಲ್ಲಿ ಸಂಜೆ 6:30 ಕ್ಕೆ ಮತ್ತು ಚಳಿಗಾಲದಲ್ಲಿ ಸಂಜೆ 6 ಗಂಟೆಗೆ ಆರತಿಯನ್ನು ನಡೆಸಲಾಗುತ್ತದೆ ಎಂದು ಸೂಚಿಸುತ್ತದೆ.

ಇದಲ್ಲದೆ, ಟ್ರಾವೆಲ್ ವೆಬ್‌ಸೈಟ್, ಟಸ್ಕ್ ಟ್ರಾವೆಲ್ ಸಹ ಯಮುನಾ ಆರತಿಯನ್ನು ಉಲ್ಲೇಖಿಸಲಾಗಿದೆ. ವಾಸುದೇವ್ ಘಾಟ್‌ನಲ್ಲಿರುವ ಯಮುನಾ ಆರತಿಯನ್ನು ಮಾರ್ಚ್ 12, 2024 ರಂದು ಡಿಡಿಎ ಉಪಾಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಮತ್ತು ಸುಭಾಶಿಶ್ ಪಾಂಡ ಉದ್ಘಾಟಿಸಿದರು ಎಂದು ಅದು ಉಲ್ಲೇಖಿಸಿದೆ. ಯಮುನಾ ನದಿಯ ಉದ್ದಕ್ಕೂ ವಜೀರಾಬಾದ್‌ನಿಂದ ಹಳೆಯ ರೈಲ್ವೆ ಸೇತುವೆಯವರೆಗೆ 66 ಹೆಕ್ಟೇರ್ ಘಾಟ್‌ಗಳನ್ನು ಪುನರುಜ್ಜೀವನಗೊಳಿಸುವ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ದ ಉಪಕ್ರಮದ ಭಾಗವಾಗಿ ವಾಸುದೇವ್ ಘಾಟ್ ಇದೆ.

ಇದಲ್ಲದೆ, ಯಮುನಾ ಆರತಿ ಹೊಸದಾಗಿ ಶುರುವಾಗಿರುವುದು ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಇಂಡಿಯಾ ಟಿವಿಯಲ್ಲಿ ನವೆಂಬರ್ 13, 2015 ರಂದು ಪ್ರಕಟವಾದ 9 ವರ್ಷದ ಹಳೆಯ ವೀಡಿಯೊದಲ್ಲಿ, ಆಗಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೊದಲ ಯಮುನಾ ಆರತಿಯನ್ನು ಗೀತಾ ಘಾಟ್‌ನಲ್ಲಿ ಆಯೋಜಿಸಿದ್ದರು ಮತ್ತು ನಡೆಸಿದ್ದರು ಎಂದು ಸೂಚಿಸುತ್ತದೆ. ಆದ್ದರಿಂದ, ವೈರಲ್ ಆಗಿರುವ ಈ ಹಕ್ಕು ಸುಳ್ಳು ಎಂದು ನಾವು ಖಚಿತಪಡಿಸಿಕೊಳ್ಳಬಹುದು.

Claim Review:ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಯಮುನಾ ನದಿಯಲ್ಲಿ ಆರತಿ ಆರಂಭ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 2024 ರಲ್ಲೇ ಯಮುನಾ ಆರತಿ ಪ್ರದರ್ಶಿಸಲು ಪ್ರಾರಂಭಿಸಲಾಗಿದೆ.
Next Story