Fact Check: ನೇಪಾಳ ಪ್ರತಿಭಟನೆಯಲ್ಲಿ ಯೋಗಿ ಆದಿತ್ಯನಾಥ್ ಬ್ಯಾನರ್ ಪ್ರದರ್ಶನ? ಸುಳ್ಳು, ಸತ್ಯ ಇಲ್ಲಿದೆ

ನೇಪಾಳದಲ್ಲಿ ಯುವಜನರ ಪ್ರತಿಭಟನೆಯ ಬಿಸಿ ಇನ್ನೂ ಕಡಿಮೆಯಾಗಿಲ್ಲ. ಏತನ್ಮಧ್ಯೆ, ಒಂದು ವೈರಲ್ ಹೇಳಿಕೆಯು, ಪ್ರತಿಭಟನಾಕಾರರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರವನ್ನು ಹೊಂದಿದ್ದರು ಎಂದು ಸೂಚಿಸುತ್ತದೆ.

By -  Vinay Bhat
Published on : 13 Sept 2025 12:34 PM IST

Fact Check: ನೇಪಾಳ ಪ್ರತಿಭಟನೆಯಲ್ಲಿ ಯೋಗಿ ಆದಿತ್ಯನಾಥ್ ಬ್ಯಾನರ್ ಪ್ರದರ್ಶನ? ಸುಳ್ಳು, ಸತ್ಯ ಇಲ್ಲಿದೆ
Claim:ನೇಪಾಳ ಪ್ರತಿಭಟನೆಯಲ್ಲಿ ಯೋಗಿ ಆದಿತ್ಯನಾಥ್ ಬ್ಯಾನರ್ ಪ್ರದರ್ಶಿಸಲಾಗಿದೆ.
Fact:ಹಕ್ಕು ಸುಳ್ಳು. ಇದು ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರ್ಯಾಲಿಯದ್ದಾಗಿದೆ.

ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲಿನ ಸರ್ಕಾರದ ನಿಷೇಧದ ವಿರುದ್ಧ ನೇಪಾಳದಲ್ಲಿ ಪ್ರಾರಂಭವಾದ ಜನರಲ್ ಝಡ್ ಚಳುವಳಿ ಹಿಂಸಾತ್ಮಕ ತಿರುವು ಪಡೆದುಕೊಂಡಿತು. ನೇಪಾಳದಲ್ಲಿ ಯುವಜನರ ಪ್ರತಿಭಟನೆಯ ಬಿಸಿ ಇನ್ನೂ ಕಡಿಮೆಯಾಗಿಲ್ಲ. ಏತನ್ಮಧ್ಯೆ, ಒಂದು ವೈರಲ್ ಹೇಳಿಕೆಯು, ಪ್ರತಿಭಟನಾಕಾರರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರವನ್ನು ಹೊಂದಿದ್ದರು ಎಂದು ಸೂಚಿಸುತ್ತದೆ.

ಫೇಸ್​ಬುಕ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡು, ‘‘ನೇಪಾಳ ಮತ್ತೆ ಮೊದಲ ಹಿಂದೂ ರಾಷ್ಟ್ರವಾಗಲಿದೆ. ಪ್ರತಿಭಟನೆಯಲ್ಲಿ ಯೋಗಿ ಆದಿತ್ಯನಾಥ್ ಬ್ಯಾನರ್​ಗಳು ಪ್ರದರ್ಶನ ವಾಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರ್ಯಾಲಿಯ ಹಳೆಯ ಫೋಟೋ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಮಾರ್ಚ್ 24 ರಂದು ನೇಪಾಳಿ ಮಾಧ್ಯಮ ದಿ ಡಿಪ್ಲೊಮ್ಯಾಟ್ ವರದಿ ಕಂಡುಬಂತು. ವೈರಲ್ ಫೋಟೋ ಇಲ್ಲಿ ಕಾಣಿಸಿಕೊಂಡಿದ್ದು, ಅದು ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ಸಭೆಯಿಂದ ಬಂದಿದೆಯೇ ಹೊರತು Gen-Z ಪ್ರತಿಭಟನೆಯಿಂದಲ್ಲ ಎಂದು ದೃಢಪಡಿಸಿದೆ. ಮಾಜಿ ರಾಜ ಜ್ಞಾನೇಂದ್ರ ಶಾ ಅವರನ್ನು ಸ್ವಾಗತಿಸಲು ಮತ್ತು ರಾಜಪ್ರಭುತ್ವದ ಪುನಃಸ್ಥಾಪನೆಗೆ ಒತ್ತಾಯಿಸಲು ಈ ರ್ಯಾಲಿಯನ್ನು ನಡೆಸಲಾಯಿತು ಎಂಬ ಮಾಹಿತಿ ಇದರಲ್ಲಿದೆ.

ಹಾಗೆಯೆ, ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನಡೆದ ರ್ಯಾಲಿಯಲ್ಲಿ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಸೇರಿದಂತೆ ಹಲವಾರು ಗುಂಪುಗಳು ಭಾಗವಹಿಸಿದ್ದವು ಎಂದು ನೇಪಾಳಿ ಮಾಧ್ಯಮ ರಾಟೋಪತಿ ಮಾರ್ಚ್ 9 ರಂದು ವರದಿ ಮಾಡಿದೆ. ಅಲ್ಲಿ ಬೆಂಬಲಿಗರು ಶಾ ಮತ್ತು ಯೋಗಿ ಆದಿತ್ಯನಾಥ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದರು. ಜನವರಿ 30 ರಂದು ಶಾ ಅವರು ಗೋರಖ್‌ಪುರಕ್ಕೆ ಭೇಟಿ ನೀಡಿದ ನಂತರ, ಆದಿತ್ಯನಾಥ್ ಅವರ ಫೋಟೋವನ್ನು ಪ್ರದರ್ಶಿಸಿದ ನಂತರ ಈ ಘಟನೆ ಗಮನ ಸೆಳೆಯಿತು.

ಮಾರ್ಚ್ 12 ರಂದು ಫಸ್ಟ್‌ಪೋಸ್ಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, "ಹಿಂದಿನ ರಾಜಮನೆತನದ ರ್ಯಾಲಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋ ಇದ್ದ ಬಗ್ಗೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರ ಮತ್ತು ಮಾಜಿ ರಾಜ ಜ್ಞಾನೇಂದ್ರ ಶಾ ಅವರ ಬೆಂಬಲಿಗರ ನಡುವೆ ಜಗಳ ಉಂಟಾಗಿದೆ." ಎಂಬ ಮಾಹಿತಿ ಇದೆ. ಇದರಲ್ಲೂ ಅದೇ ವೈರಲ್ ಫೋಟೋ ಕಾಣಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ನೇಪಾಳದಲ್ಲಿ ನಡೆದ ಜನರಲ್-ಝಡ್ ಪ್ರತಿಭಟನೆಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರವನ್ನು ಪ್ರದರ್ಶಿಸಲಾಗಿತ್ತು ಎಂಬ ಹೇಳಿಕೆ ಸುಳ್ಳು. ವೈರಲ್ ಆಗಿರುವ ಈ ಫೋಟೋ ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರ್ಯಾಲಿಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರ್ಯಾಲಿಯದ್ದಾಗಿದೆ.
Next Story