ಗುಜರಾತ್ ನಲ್ಲಿ ನಾಲ್ಕು ವರ್ಷದ ಹಿಂದೆ ನಡೆದ ಬಸ್ ಮೇಲಿನ ಕಲ್ಲುತೂರಾಟದ ವಿಡಿಯೋ ಈಗ ವೈರಲ್

ಕರ್ನಾಟಕ ಸರ್ಕಾರಿ ಬಸ್ ಉಚಿತ ಪ್ರಯಾಣಕ್ಕೆ ಮುಸ್ಲಿಮ್ ಮಹಿಳೆಗೆ ಅವಕಾಶ ಮಾಡಿಕೊಡದಿದ್ದಕ್ಕೆ ಡ್ರೈವರ್ ವಿರುದ್ಧ ಪ್ರತಿಭಟನೆ ನಡೆಸಿ, ಮುಸ್ಲಿಮರು ಕಲ್ಲುತೂರಾಟ ನಡೆಸಿದ್ದಾರೆ ಎಂದು ವೈರಲ್ ಆಗಿರುವ ಪೋಸ್ಟ್ ಸುಳ್ಳು ಸುದ್ದಿ.

By Srinivasa Mata  Published on  25 Sep 2023 1:33 PM GMT
ಗುಜರಾತ್ ನಲ್ಲಿ ನಾಲ್ಕು ವರ್ಷದ ಹಿಂದೆ ನಡೆದ ಬಸ್ ಮೇಲಿನ ಕಲ್ಲುತೂರಾಟದ ವಿಡಿಯೋ ಈಗ ವೈರಲ್

ಹೈದರಾಬಾದ್: ಉಚಿತ ಸರಕಾರಿ ಬಸ್ಸಿನಲ್ಲಿ ಮುಸ್ಲಿಂ ಮಹಿಳೆಗೆ ಹತ್ತಲು ಅವಕಾಶ ನೀಡದೆ ಭಯೋತ್ಪಾದಕರಿಗೆ ಅವಕಾಶವಿಲ್ಲ ಎಂದು ಉದ್ಧಟತನ ತೋರಿದ ಸರಕಾರಿ ಬಸ್ ಡ್ರೈವರ್ . ಉದ್ರಿಕ್ತ ಮುಸ್ಲಿಮರಿಂದ ಪ್ರತಿಭಟನೆ ಸಮಯದಲ್ಲಿ ಹಿಂಸಾಚಾರ , ಮೂರು ಬಸ್ಸುಗಳಿಗೆ ಹಾನಿ.ಮುಸ್ಲಿಮರ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸುತ್ತಿರುವ ಸಂಘಿ ಮನೋಸ್ಥಿತಿಯ ಡ್ರೈವರ್ ಗಳನ್ನೂ ಈ ಕೂಡಲೇ ಸರಕಾರ ಕೆಲಸದಿಂದ ಕಿತ್ತುಹಾಕಬೇಕಾಗಿರೋದು ಸರಕಾರದ ಮೊದಲ ಆದ್ಯತೆಯಾಗಬೇಕು. ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. - ಹೀಗೊಂದು ಒಕ್ಕಣೆಯುಳ್ಳ ಪೋಸ್ಟ್ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಸಲ್ಮಾನ್ ರಜಾ ಎಂಬುವರು ಪೋಸ್ಟ್ ಮಾಡಿದ್ದು, ನ್ಯೂಸ್ ಮೀಟರ್ ‘ಫ್ಯಾಕ್ಟ್ ಚೆಕ್’ ಮಾಡಿರುವಂತೆ ಇದು ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ.

ಈ ಫೇಸ್ ಬುಕ್ ಪೋಸ್ಟ್ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

Fact Check

ಈಗ ವೈರಲ್ ಆಗಿರುವ ಪೋಸ್ಟ್ 2019ನೇ ಇಸವಿಯ ಜುಲೈ ತಿಂಗಳಲ್ಲಿ ಗುಜರಾತ್ ನ ಸೂರತ್ ನಲ್ಲಿ ನಡೆದ ಘಟನೆ ಇದಾಗಿದೆ. ಗುಂಪು ಹಲ್ಲೆ- ಹತ್ಯೆ ವಿರುದ್ಧ ನಡೆದಿದ್ದ ಮುಸ್ಲಿಮರ ಪ್ರತಿಭಟನೆಯು ಆ ನಂತರ ಹಿಂಸಾತ್ಮಕವಾಗಿ ಬದಲಾಗಿತ್ತು. ಆ ವೇಳೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದೇ ವಿಡಿಯೋವನ್ನು ಬಳಸಿ, ಹರ್ಯಾಣದಲ್ಲಿ ನಡೆದ ಘಟನೆ ಇದು ಎಂದು ಬಿಂಬಿಸುವುದಕ್ಕೆ ಪ್ರಯತ್ನ ಕೂಡ ನಡೆದಿದೆ. ಅದರ ಫ್ಯಾಕ್ಟ್ ಚೆಕ್ ಅನ್ನು ಮಾಡಿರುವ ‘ದ ಕ್ವಿಂಟ್’ ಗುಜರಾತ್ ನ ಸೂರತ್ ನಲ್ಲಿ ನಡೆದ ಘಟನೆ ಇದು ಎಂಬುದನ್ನು ತಿಳಿಸಿದೆ.




ಇನ್ನು ಸಲ್ಮಾನ್ ರಜಾ ಎಂಬ ಹೆಸರಿನಲ್ಲಿ ಪೋಸ್ಟ್ ಆಗಿರುವ ವಿಡಿಯೋದಲ್ಲಿ ಮೊದಲಿಗೆ- ಬೆಂಗಳೂರಿನಲ್ಲಿ ಉಚಿತ ಸರಕಾರಿ ಬಸ್ಸಿನಲ್ಲಿ ಮುಸ್ಲಿಂ ಮಹಿಳೆಗೆ ಹತ್ತಲು ಅವಕಾಶ ನೀಡದೆ ಭಯೋತ್ಪಾದಕರಿಗೆ ಅವಕಾಶವಿಲ್ಲ ಎಂದು ಉದ್ಧಟತನ ತೋರಿದ BMTC ಸರಕಾರಿ ಬಸ್ ಡ್ರೈವರ್ . ಉದ್ರಿಕ್ತ ಮುಸ್ಲಿಮರಿಂದ ಪ್ರತಿಭಟನೆ ಸಮಯದಲ್ಲಿ ಹಿಂಸಾಚಾರ , ಮೂರು ಬಸ್ಸುಗಳಿಗೆ ಹಾನಿ.ಮುಸ್ಲಿಮರ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸುತ್ತಿರುವ ಸಂಘಿ ಮನೋಸ್ಥಿತಿಯ ಡ್ರೈವರ್ ಗಳನ್ನೂ ಈ ಕೂಡಲೇ ಸರಕಾರ ಕೆಲಸದಿಂದ ಕಿತ್ತುಹಾಕಬೇಕಾಗಿರೋದು ಸರಕಾರದ ಮೊದಲ ಆದ್ಯತೆಯಾಗಬೇಕು. ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. -ಹೀಗೆ ಒಕ್ಕಣೆ ಇದೆ. ಆ ನಂತರದಲ್ಲಿ ಅದನ್ನು ಬದಲಾವಣೆ ಮಾಡಲಾಗಿದೆ.




ಇನ್ನೂ ಆಸಕ್ತಿಕರ ವಿಷಯ ಏನೆಂದರೆ, 2019ನೇ ಇಸವಿಯ ಜುಲೈ ತಿಂಗಳಲ್ಲೇ @DipeshHathiyani ಎಂಬ ಹ್ಯಾಂಡಲ್ ನಿಂದ ಟ್ವೀಟ್ ಮಾಡಿದ್ದು, ಮುಂಬೈನ ಬಾಂದ್ರಾದಿಂದ ಬಿಕೆಸಿ ಮಧ್ಯೆ ಬಸ್ ಮಾರ್ಗ ಆರಂಭಿಸಿದ್ದಕ್ಕಾಗಿ ಈ ಕಲ್ಲು ತೂರಾಟ ನಡೆದಿದೆ ಎಂಬ ಪೋಸ್ಟ್ ಹಾಕಲಾಗಿದೆ. ಅದಕ್ಕೆ @DEV17072663 ಹ್ಯಾಂಡಲ್ ನಿಂದ ಕಾಮೆಂಟ್ ಹಾಕಿ, ಈ ವಿಡಿಯೋ ಜುಲೈ ನಾಲ್ಕು, ಐದರಂದು ಸೂರತ್ ನಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಿದ್ದು, ಮುಂಬೈನ ಬಾಂದ್ರಾದಲ್ಲ ಎಂದು ತಿಳಿಸಿದ್ದಾರೆ.

Conclusion

ದ ಕ್ವಿಂಟ್ ವರದಿ ಹಾಗೂ ಬೇರೆ ಸಂದರ್ಭದಲ್ಲೂ ಈ ವಿಡಿಯೋ ಬಳಸಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ (ಸದ್ಯಕ್ಕೆ ‘ಎಕ್ಸ್’) ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವುದು ಕಂಡುಬರುತ್ತದೆ. ಇನ್ನು ಸಲ್ಮಾನ್ ರಜಾ ಹೆಸರಲ್ಲಿ ಪೋಸ್ಟ್ ಮಾಡಿರುವಂತೆ ಇದು ಕರ್ನಾಟಕದಲ್ಲಿ ನಡೆದ ಈಚಿನ ಘಟನೆ ಅಲ್ಲವೇ ಅಲ್ಲ.

Claim Review:Muslims pelted stone on bus in Karnataka for not allow muslim woman in bus false claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story